ಮಂಗಳವಾರ, ಸೆಪ್ಟೆಂಬರ್ 27, 2011

ಬಾರೆನ್ನ ನಲ್ಲೆ

ತಿಂಗಳಿನ ಬೆಳಕಿನಲಿ ಮಧುಮಾಸ ರಾತ್ರಿಯಲಿ
ತಂಗಾಳಿ ಬೀಸಿಹುದು ನನ್ನ ನಲ್ಲೆ
ಅಂಗಾಂಗದೊಳಗೆಲ್ಲ ಅವಿತಿರುವ ಬಯಕೆಗಳು
ಕಂಗಳಲಿ ತೋರುತಿವೆ ನನ್ನ ನಲ್ಲೆ

ಹಾವಭಾವದಿ ಮೆರೆದು ಕುಡಿನೋಟದಲ್ಲೆನ್ನ
ತಿವಿಯದಿರು ನೀನೀಗ ಕಣ್ಣಿನಲ್ಲೆ
ತಾವರೆಯ ಮೊಗವನ್ನು ಈಗ ತಾನೇ ನೋಡಿ
ಸಾವರಿಸಿಕೊಂಡಿಹೆನು ನನ್ನ ನಲ್ಲೆ

ಸಲ್ಲಾಪ ಸರಸಗಳ ಮಳೆ ಹನಿಯು ಉದುರಿಹುದು
ಮೆಲ್ಲ ಮೆಲ್ಲನೆ ನಿನ್ನ ಮಾತಿನಲ್ಲೆ
ಮಲ್ಲಿಗೆಯ ಕಂಪಿನೊಳು ಮೈ ಮರೆತು ನಿನ್ನನ್ನು
ಪಲ್ಲಂಗ ಕಾದಿಹುದು ನನ್ನ ನಲ್ಲೆ

ಸ್ಫೂರ್ತಿ: ಈಶ್ವರ ಕಿರಣ್ ಭಟ್ ಅವರ "ಏಳೆನ್ನ ನಲ್ಲೆ" ಎಂಬ ಕವನ

17 ಕಾಮೆಂಟ್‌ಗಳು:

ಶ್ರೀಪಾದು ಹೇಳಿದರು...

ಭರ್ಜರಿ ಕವನ ...ಹರಿಗೆ ಮದ್ವೆಗೆ ಕಾಲ ಪಕ್ವ ಆಯ್ದು

Ittigecement ಹೇಳಿದರು...

ಸುಂದರ ಕವನ...

ಶ್ರೀಪಾದರ ಅಭಿಪ್ರಾಯವೇ ನನ್ನದೂ ಕೂಡ..

ತೇಜಸ್ ಜೈನ್ Tejas jain ಹೇಳಿದರು...

ಮೇಲಿನ ೨ ಅಭಿಪ್ರಾಯಗಳಿಗೆ ನನ್ನ +೧
+ಸೂಪರ್ ಲೈಕ್

ಜಲನಯನ ಹೇಳಿದರು...

ಹರೀಶ್, ಕ್ರಿಸ್ಪ್ ಅಂಡ್ ಸ್ಟ್ರಾಂಗ್ ಹಪ್ಪಳ ತಿಂದಹಾಗಾಯ್ತು..
ನಲ್ಲೆಯ ಬಲ್ಲೆ
ಅವಳಂದಕಿಲ್ಲ ಎಲ್ಲೆ
ಚನ್ನಾಗಿದೆ ಪದಬಳಕೆ..

Manjunath ಹೇಳಿದರು...

ಸೂಪರ್ !!!!

sunaath ಹೇಳಿದರು...

ಹರೀಶ,
It is very romantic!

Ranganath ಹೇಳಿದರು...

ಹರೀಶ ಬೇಗ ಮದುವೆ ಆಗು ;)

ಈಶ್ವರ ಹೇಳಿದರು...

ನನ್ನ ಹೆಸರು ಹಾಕಿದ್ದು ನಿನ್ನ ದೊಡ್ದತನ. ಈ ಕವನ ಸೂಪರ್. ಆದಿಪ್ರಾಸ ಮತ್ತೆ ಅಂತ್ಯಪ್ರಾಸ ಎರಡೂ ಚೆನ್ನಾಗಿದೆ.

ಸೂಪರ್ ಹರೀಶ್ ..

ಅನು. ಹೇಳಿದರು...

ಕೆ.ಎಸ್.ಎನ್.ಅವರನ್ನು ನೆನಪಿಸುವಂತ ಕವನ ಬರದಿದ್ದಕ್ಕೆ ಮನಸ್ಸಿಗೆ ಮುದ ಕೊಟ್ಟಿತು..ಇಂತಹ ಕವನಗಳು ಇನ್ನೂ ಬರಲಿ..ಹರೀಶ...

lakshmibhat ಹೇಳಿದರು...

ಆ ನಲ್ಲೆ ....
ಯಾರೆ೦ದು ಕೇಳಬಹುದಲ್ಲವೇ

vishutk ಹೇಳಿದರು...

Super Harish.. Madve date tilsodu maribeda.. :-)

Harisha - ಹರೀಶ ಹೇಳಿದರು...

ಶ್ರೀಪಾದು, ಧನ್ಯವಾದ.. ಮದುವೆ ಇನ್ನೂ ದೂರ ಇದ್ದು .. :)

ಪ್ರಕಾಶಣ್ಣ, ಧನ್ಯವಾದ ಪ್ರಕಾಶಣ್ಣ.. ಶ್ರೀಪಾದು ಹೇಳಿದ್ದೆಲ್ಲ ಕೇಳಡ...

ತೇಜಸ್, ಮೇಲಿನ ಅಭಿಪ್ರಾಯವೇ ನಿನಗೂ :-) ಧನ್ಯವಾದ

ಆಜಾದ್ (ಜಲನಯನ) ಅವರೇ, ಕವನ ನಿಮಗಿಷ್ಟವಾಗಿದ್ದು ಸಂತೋಷ :)

ಮಂಜು, ಧನ್ಯವಾದ :)

ಸುನಾಥ ಕಾಕಾ, :) :)

ರಂಗ, ನೀನು ಎಷ್ಟಂದ್ರೂ ದೊಡ್ಡೋನು.. ಮೊದಲು ನೀನೇ ಆಗು‌ :)

ಕಿರಣಣ್ಣ, ಈ ಕವನಕ್ಕೆ ಸ್ಫೂರ್ತಿ ನಿನ್ನ ಕವನ. ಹಾಗಾಗಿ ನಿನ್ನ ಇಲ್ಲಿ ನಿನ್ನ ಹೆಸರು ಹಾಕದು ನನ್ನ ಕರ್ತವ್ಯ :)

ಕವನ, ಅಷ್ಟು ದೊಡ್ಡ ಕವಿಗೆ ಹೋಲಿಸಿ ನನ್ನನ್ನು ಮುಜುಗರಕ್ಕೆ ಒಳಪಡಿಸಬೇಡಿ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದ :)

ಲಕ್ಷ್ಮತ್ತೆ, ಖಂಡಿತ ಕೇಳಬಹುದು! ಗೊತ್ತಾದಾಗ ತಿಳಿಸಲಾಗುವುದು :P

ವಿಶು, ನೀನು ಮೊದಲು ಭಾರತಕ್ಕೆ ವಾಪಸ್ ಬಾ.. ಆಮೇಲೆ ದಿನಾಂಕ ನೋಡೋಣ :)

ಚಿತ್ರಾ ಹೇಳಿದರು...

ವಾಹ್ !
ಸೂಪರ್ ಆಗಿದ್ದು ಹರೀಶ ! ಇದನ್ನು ಓದಿ ಖಂಡಿತಾ ಓದಿಬರಲೇ ಬೇಕು ಆ " ನಿನ್ನ ನಲ್ಲೆ " ! ಮಸ್ತ್ ಇದ್ದು !

Harisha - ಹರೀಶ ಹೇಳಿದರು...

ಧನ್ಯವಾದ ಚಿತ್ರಕ್ಕಾ :-)

ಸೋಮಶೇಖರ ಹುಲ್ಮನಿ ಹೇಳಿದರು...

ನಿನ್ನ ಕವನ ಹೊಗಳಲು ನನ್ನ ಭಾಷೆ ಬಡವಾಗಿದೆ ಹರೀಶ ....
ಯಾರಾದರು ಶ್ರೀಮಂತರು ಸಾಲ ಕೊಡಿ plz

prashasti ಹೇಳಿದರು...

ಚನಾಗಿದ್ದೋ ಹರೀಶಣ್ಣ

ಮೌನರಾಗ ಹೇಳಿದರು...

Nice one..