- ಫೆಬ್ರುವರಿಯಲ್ಲಿ ಬೆಂಗಳೂರಿನ ಸಮೀಪವಿರುವ ಸ್ಕಂಧಗಿರಿಗೆ ಹೋಗಿದ್ದೆವು. ಆದರೆ ನಾವು ಹೋದ ದಿನ ಮೋಡವೇ ಇಲ್ಲದೆ ನನಗೆ ಮತ್ತೆ ನಿರಾಸೆಯಾಯಿತು.
- ಮಾರ್ಚಿನಲ್ಲಿ ಊರಿನಿಂದ ಬರುವಾಗ ಬಸ್ಸಿನಲ್ಲಿ "ದಟ್ಸ್-ಕನ್ನಡ"ದ ಶ್ಯಾಮಸುಂದರ್ ಅವರನ್ನು ಭೇಟಿಯಾಗಿದ್ದೆ. ಬ್ಲಾಗಿಗರ ಕೂಟ ನಡೆದು ಅಂದಿಗೆ ಸರಿಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ಅದನ್ನು ನೆನಪಿಸಿಕೊಂಡೆವು.
- ಏಪ್ರಿಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಕೇರಳದ ವಯನಾಡಿಗೆ ಹೋಗಿದ್ದೆವು. ಅದೊಂದು ಅಭೂತಪೂರ್ವ ಅನುಭವ.
- ಈಗ ಸುಮಾರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಲಿನಕ್ಸ್ ಅನ್ನೇ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಇಲ್ಲದೆಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ. ಈ ಲೇಖನವನ್ನು ಬರೆಯುತ್ತಿರುವುದೂ ಉಬುಂಟು ಲಿನಕ್ಸ್ ನಲ್ಲಿಯೇ. ಆರಂಭದಲ್ಲಿ ಕನ್ನಡ ಬಳಸುವಲ್ಲಿ ಸ್ವಲ್ಪ ತೊಡಕಾದಾಗ ಸಹಕರಿಸಿದ ಓಂ ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
- ಮುಂಚೆ ಸೌಹಾರ್ದಯುತವಾಗಿದ್ದ ಕನ್ನಡ ಬ್ಲಾಗ್ ಲೋಕಕ್ಕೆ ಈಗ ಗುಂಪುಗಾರಿಕೆ ತಲೆದೋರಿದಂತೆ ಕಾಣುತ್ತಿದೆ. (ಇದು ನನ್ನ ಸ್ವಂತ ಅನಿಸಿಕೆ ಮಾತ್ರ) ಇದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಅಪಾಯಕಾರಿ ಬೆಳವಣಿಗೆ.
- ಸಾವಿರದಷ್ಟು ಬ್ಲಾಗ್ ಬರಹಗಳನ್ನು ಓದುವುದು ಬಾಕಿ ಇದೆ. ಎಂದು ಓದಿ ಮುಗಿಸುವೆನೋ ತಿಳಿದಿಲ್ಲ. ಬ್ಲಾಗ್ ಓದುವಲ್ಲಿ, ಬರೆಯುವಲ್ಲಿ ಈಗೆರಡು ವರ್ಷಗಳ ಹಿಂದೆ ಇದ್ದ ಆಸಕ್ತಿ, ಹುರುಪು ಈಗ ಉಳಿದಿಲ್ಲ.
ಶುಕ್ರವಾರ, ಸೆಪ್ಟೆಂಬರ್ 18, 2009
ಮರಳಿ ಮರೆಯಾಗಿ...
ಬಾಳ ದೋಣಿ ಅಂಬಿಗರಿಲ್ಲದೆ ಅನಾಥವಾಗಿ ಬರೋಬ್ಬರಿ ಏಳು ತಿಂಗಳಾಯಿತು. ಕೆಲಸದ ಒತ್ತಡ, ಬರೆಯಬೇಕೆಂದರೂ ಬೇಡವೆನ್ನುವ ಮನಸು, ಓದುವುದರಲ್ಲೂ ಕಂಡುಬಂದ ನಿರಾಸಕ್ತಿ - ಹೀಗೆ.. ಕಾರಣಗಳು ಹಲವಾರು. ಇಲ್ಲಿಯವರೆಗೆ ನಡೆದಿದ್ದನ್ನು ಸಂಕ್ಷಿಪ್ತವಾಗಿ ಹೇಳಿಕೊಳ್ಳುವ ಬಯಕೆ:
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)