ಭಾನುವಾರ, ನವೆಂಬರ್ 16, 2008

ಕಥೆ ಕಥೆ ಕಾರಣ, ಬೆಕ್ಕಿನ ತೋರಣ - ನಂಗೂ ಗೊತ್ತು!

ಕಥೆ ಕಥೆ ಕಾರಣ ಎಂಬ ಶರ್ಮರ ಪೋಸ್ಟ್ ನೋಡಿದಾಗ ಬಾಲ್ಯದಲ್ಲಿ ಹೇಳುತ್ತಿದ್ದ ಪದ್ಯವೊಂದು ನೆನೆಪಾಯಿತು. ಇನ್ನೂ ಸ್ವಲ್ಪ ದಿನ ಕಳೆದರೆ ಮರೆತು ಹೋಗಬಹುದು. ಹಾಗಾಗಿ ಈಗಲೇ ಹಾಕುತ್ತಿದ್ದೇನೆ...

ಕಥೆ ಕಥೆ ಕಾರಣ
ಬೆಕ್ಕಿನ ತೋರಣ
ಸಿದ್ಧೆಲ್ಲಿಪ್ಪಣ
ಸೀತಾ ದೇವಿಗೆ
ಹಿಟ್ ಕುಟ್ಟಲ್ ಕಪ್ಪೆ ಬಂತು
ಕಪ್ಪೆ ತಿನ್ನಲ್ ಹಾವ್ ಬಂತು
ಹಾವ್ ಹೊಡ್ಯಲ್ ದೊಣ್ಣೆ ಬಂತು
ದೊಣ್ಣೆ ಸುಡಲ್ ಬೆಂಕಿ ಬಂತು
ಬೆಂಕಿ ನಂದ್ಸಲ್ ನೀರ್ ಬಂತು
ನೀರ್ ಕುಡ್ಯಲ್ ಬಸವ ಬಂದ
ಬಸವನ್ ಕಟ್ಹಾಕಲ್ ದಾಬ್ ಬಂತು
ದಾಬ್ ಹರ್ಯಲ್ ಇಲಿ ಬಂತು
ಇಲಿ ಹೊಡ್ಯಲ್ ಅಜ್ಜ ಬಂದ
ಅಜ್ಜನ್ ಹೊಡ್ಯಲ್(ಕರ್ಯಲ್) ಅಜ್ಜಿ ಬಂತು
** *** ಮೂರು ಕಟ್ಟೆರ
ಕಟ್ಟಂ ಕಟ್ಟಂ ಕಟ್ಟಂ!!!


ಇದರಲ್ಲೇನಾದರೂ ತಪ್ಪಿದ್ದರೆ ಗೊತ್ತಿದ್ದವರು ತಿಳಿಸಿ.

ಬುಧವಾರ, ನವೆಂಬರ್ 5, 2008

ಮಹಾಭಾರತ ನಿರ್ಮಾಪಕ ಬಿ.ಆರ್.ಚೋಪ್ರಾ ಇನ್ನಿಲ್ಲ

ಎಂಭತ್ತರ ದಶಕದ ಕೊನೆ ಹಾಗೂ ತೊಂಭತ್ತರ ದಶಕದ ಆದಿಯಲ್ಲಿ ಪ್ರತಿ ಭಾನುವಾರ ದೂರದರ್ಶನದಲ್ಲಿ ಬರುತ್ತಿದ್ದ ಮಹಾಭಾರತ ಧಾರಾವಾಹಿ ಯಾರಿಗೆ ತಿಳಿದಿಲ್ಲ ಹೇಳಿ? ಭಾರತೀಯ ದೂರದರ್ಶನ ಇತಿಹಾಸದ ಅತ್ಯಂತ ಯಶಸ್ವಿ ಧಾರಾವಾಹಿಯಾಗಿದ್ದ ಮಹಾಭಾರತದ ನಿರ್ಮಾಪಕ ಬಿ. ಆರ್. ಚೋಪ್ರಾ ಇಂದು ಮುಂಬಯಿಯಲ್ಲಿ ನಿಧನರಾದರು.

ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ಹಿಂದಿ ಚಿತ್ರರಂಗ ಕಂಡ ಉತ್ತಮ ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ಬಲದೇವ್ ರಾಜ್ ಚೋಪ್ರಾ (ಬಿ. ಆರ್. ಚೋಪ್ರಾ) ೧೯೫೫ ರಲ್ಲಿ ತಮ್ಮದೇ ಆದ ಬಿ.ಆರ್.ಫಿಲ್ಮ್ಸ್ ಪ್ರಾರಂಭಿಸಿದ್ದರು.

ಕಾಕತಾಳೀಯವೆಂಬಂತೆ ಅವರು ನಿರ್ಮಿಸಿದ ಮಹಾಭಾರತ ಕೂಡ ೯೪ ಕಂತುಗಳನ್ನು ಹೊಂದಿದ್ದು, ಅದನ್ನು ಉಚಿತವಾಗಿ ನೋಡಲು ಅಥವಾ ಕೊಳ್ಳಲು ಇಲ್ಲಿಗೆ ಹೋಗಬಹುದು:
http://www.rajshri.com/mahabharat/index.asp