ಶುಕ್ರವಾರ, ಡಿಸೆಂಬರ್ 23, 2016

ಏನಿದು ಕವನ!?


 
 
ಏನಿದು ಕವನ!? ನನ್ನಲೇಕೋ ಮೌನ.
ಬರೆವ ಕುಳಿತರೂ, ಬರದೀ ಮನಕೆ!?

ಭಾವನೆ ಎಲ್ಲಿಹುದು!? ಮನದಿ ತಡಕಾಡಿದರೂ ಸಿಗದಾಗಿಹುದು.
ಮಳೆಯಿಲ್ಲದ ನೆಲದಲ್ಲಿ, ಜಲಕೆ ಪರಿತಪಿಸುವಂತಾಗಿಹುದು.

ಜೀವನದ ಜಂಜಾಟದಿ, ಮರೆತೆನಾ ನನ್ನನೇ!?
ಸಮಯದಾ ಕುದುರೆಯೇರಿ, ತೊರೆದೆನಾ ಭಾವನೆಯನ್ನೆ!?

ಏನಿದು ಕವನ!? ನನ್ನಲೇಕೋ ಮೌನ.

ಶನಿವಾರ, ಜನವರಿ 30, 2016

ವಿಚಿತ್ರ

ಬೆಳೆಗೆ ಬೇಕು ಮಳೆ
ಸತ್ಯ ಅರಿವಾಗಲು ಸಮಯ ಬೇಕಿತ್ತು
ಮಳೆ ಇಲ್ಲದಿದ್ದರೂ ಬೆಳೆ
ಆದರೆ ಅದು ಪಾಪಸುಕಳ್ಳಿ

ಅವರವರ ಭಾವಕೆ ಅವರವರ ಭಕುತಿಗೆ
ಹೇಳಿದ್ದ ಅವನು ಹಲವು ಬಾರಿ
ಆದರೆ ಈ ಕ್ಷಣ  ಅವನಿಗದು ದುಬಾರಿ

ಬರೆದರೆ ಅರ್ಥವಾಗುವ ಹಾಗೆ ಬರೆಯಬೇಕು
ಯಾರಿಗೆ?
ಪ್ರಶ್ನೆ ನನ್ನಲ್ಲಿದೆ ಮೊದಲಿನಿಂದ

ಹುಟ್ಟಿದ ದಿನ ಹುಡಕದಿರಿ ಪಾಪಸುಕಳ್ಳಿ
ಸಿಕ್ಕರೂ ದುಬಾರಿ ಅದು ಸುಭಿಕ್ಷದ  ನಾಡಲ್ಲಿ
ಏನು ಅರ್ಥವಾಗಲಿಲ್ಲವೇ....! ಕ್ಷಮಿಸಿ ಹಾಗಿದ್ದರೆ ಇದು ನಿಮಗಲ್ಲ.