ಭಾನುವಾರ, ಆಗಸ್ಟ್ 14, 2011

ಕೆಚ್ಚದೆಯ ಕರುಳ ಕುಡಿಗಳೇ..

ಭಾರತ ಮಾತೆಯ ಕೆಚ್ಚದೆಯ ಕರುಳ ಕುಡಿಗಳೇ,
ಮನವ ಮಾತೃಭೂಮಿಗೆ ಮುಡಿಸಿ,
ನೈಜ ಬದುಕ ಬಿಂಬಿಸುವ ಆಚರಣೆ ಎಲ್ಲಿಹುದು,
ಸ್ವಂತ ಸಂಸ್ಕೃತಿಯ ಪರಿಭಾಷೆ ಎನಿಸುವ ನಡತೆ ಎಲ್ಲಿಹುದು,
ಒಗ್ಗಟ್ಟ ಬಲವು ಮೆರೆಸುವ ಆ ಏಕಮತವೆಲ್ಲಿಹುದು,
ಸಹನೆಯ ಸರಿಯಾದ ಅರ್ಥವೆಲ್ಲಿಹುದು,
ಪ್ರಶ್ನಿಸು ನಿನ್ನನೊಮ್ಮೆ ನೀ,
ತಿರುಗಿ ನೋಡೊಮ್ಮೆ ವೀರ ಮನಗಳ ನಡೆದ ದಾರಿಯನು,
ಗುರಿಯೊಂದೆ ಬದುಕಿನಲಿ,
ಬಲವೊಂದು ಮುಷ್ಟಿಯಲಿ,
ಕಠಿಣ ದಾರಿಯ ಕರಗಿಸಿ,
ರಕ್ತದೋಕುಳಿಯ ಹರಿಸಿ,
ಎಲ್ಲಿರುವರಲ್ಲಿಂದ ಸ್ವಂತ ಜೀವನ ಮರೆತು,
ಸ್ವಾತಂತ್ರ ಪಡೆದ ವೀರ ಜನತೆಯರತ್ತ,
ಈ ಮಾತೃಭೂಮಿಯ ಮುದ್ದಿನ ಕಂದಗಳತ್ತ.
ಪ್ರಶ್ನಿಸೊಮ್ಮೆ ನಿನ್ನ ನೀ,
ಎಲ್ಲಿರುವೆವು ಇಂದು ನಾವು ಸ್ವಾತಂತ್ರ್ಯದ ಅರ್ಥದಲಿ...

4 ಕಾಮೆಂಟ್‌ಗಳು:

ಸೋಮಶೇಖರ ಹುಲ್ಮನಿ ಹೇಳಿದರು...

ಈ ಮಾತೃಭೂಮಿಯ ಮುದ್ದಿನ ಕಂದಮ್ಮಗಳಾಗಿ ನಾವು ಮಾಡಬೇಕಿರುವ ಕೆಲಸವನ್ನು
ನೆನೆಸುವ ಈ ದೇಶಭಕ್ತಿ ಗೀತೆ ಮನಮುಟ್ಟುವಂತೆ ಬಂದಿದೆ ....
ಸ್ವಾತಂತ್ರೋತ್ಸವದ ಶುಭಾಶಯಗಳು

sunaath ಹೇಳಿದರು...

ಹುರುಪು ತುಂಬುವ ಕವನ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Harisha - ಹರೀಶ ಹೇಳಿದರು...

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಅನ್ನೋ ಕವಿವಾಣಿ ನೆನಪಾಗ್ತಾ ಇದೆ :) :(

vishutk ಹೇಳಿದರು...

ಸೋಮು, ಸುನಾಥರವರಿಗೆ ಹಾಗೂ ಹರೀಶ್.. ಎಲ್ಲರಿಗೂ ಧನ್ಯವಾದಗಳೊಂದಿಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನನ್ನ ಸಣ್ಣ ಅನಿಸಿಕೆ.. ಯಾವಾಗ ನಾವು ಸ್ವಂತ ಶಕ್ತಿಯನ್ನು ಹೆಚ್ಚಿಸುತ್ತೆವೋ ಆಗ ದೇಶದ ಶಕ್ತಿ ಹೆಚ್ಚುತ್ತದೆ.